ಮಾತು ಮುಗಿಸಿದ ತಿಪ್ಪಜ್ಜಿ ಸರ್ಕಲ್

  • IndiaGlitz, [Friday,April 11 2014]

ಹಲವು ಭಂಗಿಗಳಲ್ಲಿ ಡಾಕ್ಟರ್ ಸುರೇಶ್ ಶರ್ಮ ಅವರು ರತಿ ಮನ್ಮಥ ಹಾಡಿನಲ್ಲಿ ರಷ್ಯಾ ದೇಶದ ಅನ್ನಾ ಅವರನು ಅಪ್ಪಿ ಮುದ್ದಾಡುತ್ತಿರುವುದನ್ನು ಮಾಧ್ಯಮಗಳಿಗೆ ಕಳಿಸಿಕೊಟ್ಟಿದ್ದಾರೆ. ಆದರೆ ಅದು ‘ತಿಪ್ಪಜ್ಜಿ ಸರ್ಕಲ್’ ಸಿನೆಮಾದ ಒಂದು ರಸಮಯ ಘಳಿಗೆ ಅಷ್ಟೇ. ಚಿಕ್ಕಣ್ಣ ಅವರ ಬಹು ನಿರೀಕ್ಷಿತ ಸಿನೆಮಾ ಪೂಜಾ ಗಾಂಧಿ ಅವರ ಶೀರ್ಷಿಕೆ ಪಾತ್ರದ ಸಿನೆಮಾ ಇತ್ತೀಚಿಗೆ ಮಾತಿನ ಬಾಗದ ಜೋಡಣೆ ಕೆಲಸ ಪೂರ್ತಿಗೊಳಿಸಿದೆ.

ರೂಬಿ ಸಿನಿ ಕ್ರಾಪ್ಟ್ ಸಂಸ್ಥೆಯಲ್ಲಿ ಆರ್.ಜಿ.ಸಿದ್ದರಾಮಯ್ಯ ನಿರ್ಮಿಸುತ್ತಿರುವ ತಿಪ್ಪಜ್ಜಿ ಸರ್ಕಲ್ ಚಿತ್ರಕ್ಕೆ ಕಳೆದ ವಾರ ಆಕಾಶ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಮಾತುಗಳ ಧ್ವನಿಮುದ್ರಣ ಕಾರ್ಯ ಮುಗಿಸಿದ್ದು ಇದೇ ತಿಂಗಳ ಕೊನೆಯ ವಾರದಲ್ಲಿ ಹಾಡುಗಳ ಧ್ವನಿ ಸುರುಳಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

ಆದಿತ್ಯ ಚಿಕ್ಕಣ್ಣ ಚಿತ್ರಕಥೆ ರಚಿಸಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಪಿ.ಕೆ.ಹೆಚ್.ದಾಸ್ ಛಾಯಾಗ್ರಹಣ, ಡಾ ಬಿ.ಎಲ್.ವೇಣು ಕಥೆ ಮತ್ತು ಸಂಭಾಷಣೆ, ಭರಣಿ ಶ್ರೀ ಸಂಗೀತ, ದೀಪು ಎಸ್.ಕುಮಾರ್ ಸಂಕಲನ, ಗೂಟೂರಿ, ಭರಣಿ ಶ್ರೀ, ಗೌಸ್ಫಿರ್, ಸಾಹಿತ್ಯ, ತ್ರಿಭುವನ್, ಮದನ್ ಹರಿಣಿ ನೃತ್ಯ ನಿರ್ದೇಶನವಿದೆ. ಪೂಜಾ ಗಾಂಧಿ, ಡಾ ಸುರೇಶ್ ಶರ್ಮ, ದೃವಶರ್ಮ, ಸ್ನೆಹ ಪಾಟೀಲ್, ಭವ್ಯ, ಸತ್ಯಜಿತ್, ಶ್ರೀನಿವಾಸಮೂರ್ತಿ, ಮಾನಸಿ, ಸುರೇಶ್ರೈ, ಜಯರಾಂ, ಬೇಬಿ ಅನುಷ್, ಜ್ಯೋತಿ, ಗುರುಪ್ರಸಾಧ್ ಅಭಿನಯಿಸುತ್ತಿದ್ದಾರೆ.