close
Choose your channels

ಬೆಂಗಳೂರಿನಲ್ಲಿ ಮಳೆ

Friday, October 24, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಬೆಂಗಳೂರಿನಲ್ಲಿ ಮಳೆ ಅಕ್ಟೋಬರ್ ಮುಗಿಯುತ್ತಾ ಬಂದರು ಕಾಣುತ್ತಲೆ ಇದ್ದೇವೆ. ಇದು ಪರಿಸರದ ವ್ಯತ್ಯಾಸದ ಪರಿಣಾಮ. ಈಗ ಮಳೆ ಚಿತ್ರ ತಂಡ ಮಳೆ ಇರುವ ಸ್ಥಳಗಳಿಗೆ ಹೋಗಿ ಚಿತ್ರೀಕರಣ ಮುಗಿಸಿ ಬಂದರು ಅವರಿಗೆ ಬೆಂಗಳೂರಿನಲ್ಲಿ ಮಳೆ ತಪ್ಪಿಲ್ಲ. ಅಯ್ಯೋ ಇಲ್ಲೇ ಚಿತ್ರೀಕರಣ ಮಾಡಬಹುದಿತ್ತಲ್ಲ ಎಂದು ಯೋಚಿಸಿದ್ದು ಆಗಿದೆ.

ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆರ್,ಚಂದ್ರು ಅವರು ನಿರ್ಮಿಸುತ್ತಿರುವ ಮಳೆ ಚಿತ್ರದ ಮೂರು ಹಾಡುಗಳ ಚಿತ್ರೀಕರಣವನ್ನು ಚಿಕ್ಕಮಗಳೂರು ಹಾಗೂ ಸಕಲೇಶಪುರದಲ್ಲಿ ಮುಗಿಸಿದ ಚಿತ್ರತಂಡ ಈಗ ಬೆಂಗಳೂರಿಗೆ ಆಗಮಿಸಿದೆ. ಉದ್ಯಾನನಗರಿಯಲ್ಲಿ ಮಳೆ ಗೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.

ನಿರ್ದೇಶಕ ಆರ್.ಚಂದ್ರು ಕಥೆ,ಚಿತ್ರಕಥೆ ಬರೆದಿರುವ ಈ ಚಿತ್ರವನ್ನು ತೇಜಸ್ ನಿರ್ದೇಶಿಸುತ್ತಿದ್ದಾರೆ. ಪ್ರೇಂ(ನೆನಪಿರಲಿ) ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಅಮೂಲ್ಯ. ಸುಜ್ಞಾನ್ ಛಾಯಾಗ್ರಹಣ,ಜೆಸ್ಸಿಗಿಫ಼್ಟ್ ಸಂಗೀತ ನಿರ್ದೇಶನ,ಕೆ.ಎಂ.ಪ್ರಕಾಶ್ ಸಂಕಲನ,ಮುರಳಿ,ಹರ್ಷ ನೃತ್ಯ ನಿರ್ದೇಶನ,ಥ್ರಿಲ್ಲರ್ ಮಂಜು,ರವಿವರ್ಮ ಸಾಹಸ ನಿರ್ದೇಶನ,ಹೊಸ್ಮನೆ ಮೂರ್ತಿ ಕಲಾನಿರ್ದೇಶನ ಹಾಗೂ ಸುಧೀಂದ್ರ ಹೊಸಳ್ಳಿ ಅವರ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಕೆ.ಮುನೀಂದ್ರಪುರ.

Follow us on Google News and stay updated with the latest!   

Comments

Welcome to IndiaGlitz comments! Please keep conversations courteous and relevant to the topic. To ensure productive and respectful discussions, you may see comments from our Community Managers, marked with an "IndiaGlitz Staff" label. For more details, refer to our community guidelines.
settings
Login to post comment
Cancel
Comment