ಒಂದ್ ಛಾನ್ಸ್ ಕೊಡಿ-ಯು

  • IndiaGlitz, [Thursday,September 25 2014]

ಶೀರ್ಷಿಕೆ ಒಂದ್ ಛಾನ್ಸ್ ಕೊಡಿ ಈಗ ಸೆನ್ಸಾರ್ ಮಂಡಳಿ ಯು ಅರ್ಹತಾ ಪತ್ರವನ್ನು ಕೊಟ್ಟು ಒಂದ್ ಛಾನ್ಸ್ ಕೊಟ್ಟಿದ್ದಾರೆ. ಇನ್ನೆನಿದ್ದರೂ ಪ್ರೇಕ್ಷಕ ಮಹಾ ಪ್ರಭು ಛಾನ್ಸ್ ಕೊಡಬೇಕು ಹಾಗೂ ಮಾಧ್ಯಮ ಒಂದು ಉತ್ತಮ ಚಿತ್ರ ಅಂತ ಛಾನ್ಸ್ ಕೊಡಬೇಕು.

ಮೌಲ್ಯ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಆರ್.ಎಂ. ಸುನೀಲ್ ಕುಮಾರ್ ನಿರ್ಮಾಣದ ಸತ್ಯಮಿತ್ರ ನಿರ್ದೇಶನದ ಒಂದ್ ಚಾನ್ಸ್ ಕೊಡಿ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು ಸರ್ಟಿಫಿಕೇಟ್ ನೀಡಿದೆ. ಶೀಘ್ರದಲ್ಲೆ ಬಿಡುಗಡೆಯಾಗಲಿರುವ ಈ ಚಿತ್ರದ ಛಾಯಾಗ್ರಹಣ - ಮ್ಯಾಥ್ಯೂರಾಜನ್,ಸಂಗೀತ - ಮೈಸೂರು ಮೋಹನ್,ನೃತ್ಯ - ನಾಗೇಶ್,ರಾಮು,ಸಾಹಸ - ಸುಪ್ರೀಂ ಸುಬ್ಬು,ಸಂಭಾಷಣೆ - ಬಿ.ಎಂ. ಮಧು,ಸಂಕಲನ - ಸಂಜೀವ್ ರೆಡ್ಡಿ,ಕಲೆ-ರೇವಣ್ಣ,ಸಹನಿರ್ದೇಶನ - ಪಿ.ಆರ್. ಲಕ್ಷ್ಮೀಪತಿ,ಪ್ರಕಾಶ್ ಕೆ,ಕಿಶೋರ್ ಭಾಯ್,ನಿರ್ಮಾಣ ಮೇಲ್ವಿಚಾರಣೆ - ಗಂಗು,ಎಂಸಿ ಹೇಮಂತಗೌಡ - ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ರವಿಶಂಕರ್ ಗೌಡ,ಪಟ್ರೆ ಅಜಿತ್,ಡಾ ನಂದಿನಿ,ಶೃತಿ,ಲಿಂಟೋ,ಬಿ.ಸಿ. ಪಾಟೀಲ್,ಶಂಕರ್ ರಾವ್,ಸಾಧುಕೋಕಿಲ,ಟೆನ್ನಿಸ್ ಕೃಷ್ಣ,ಮೂಗು ಸುರೇಶ,ಬ್ಯಾಂಕ್ ಜನಾಧನ್,ಬಿರಾದ್,ಹೊನ್ನವಳ್ಳಿ ಕೃಷ್ಣ,ಎಂ.ಎಸ್. ಉಮೇಶ್,ಮೋಹನ್ ಜುನೇಜ,ಮನ್ ದೀಪ್ ರಾಯ್,ತಬಲಾ ನಾಣಿ,ತೇಜ್ ವಿನಯ್ ಮುಂತಾದವರಿದ್ದಾರೆ.

More News