ಊಟಿಯಲ್ಲಿ ಮಸ್ತ್ ಮೊಹಬತ್

  • IndiaGlitz, [Thursday,April 17 2014]

ಮಸ್ತ್ ಮೊಹಬತ್ ಚಿತ್ರಕ್ಕೆ ನಾಯಕಿ ಬದಲಾವಣೆ ಆಗಿದ್ದು ಊಟಿಯಲ್ಲಿ 10 ದಿವಸಗಳ ಚಿತ್ರೀಕರಣ ಮುಗಿಸಿ ನೆನಪಿರಲಿ ಪ್ರೇಮ್ ಅಭಿನಯದ ಬಹು ನಿರೀಕ್ಷಿತ ಚಿತ್ರ ತಂಗಿ ಸೆಂಟಿಮೆಂಟ್ ಸಹ ಒಳಗೊಂಡಿದೆ. ಇದರೊಂದಿಗೆ ‘ಮಸ್ತ್ ಮೊಹಬತ್’ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ ಎಂದು ಮಾನಸ ಮೂವೀಸ್ ಲಾಂಛನದಲ್ಲಿ ತಯಾರುಗುತ್ತಿರುವ ನಿರ್ಮಾಪಕ ವಿ.ಶೇಖರ್ ತಿಳಿಸಿದ್ದಾರೆ.

‘ಮಸ್ತ್ ಮೊಹಬತ್’ ಚಿತ್ರಕ್ಕೆ ಊಟಿಯಲ್ಲಿ ಹತ್ತು ದಿನಗಳ ಚಿತ್ರೀಕರಣದಲ್ಲಿ ಪ್ರೇಂ (ನೆನಪಿರಲಿ), ಪೂನಂ, ಅರ್ಚನ, ರಾಜುತಾಳಿಕೋಟೆ, ಶಕಿಲಾ, ಚಿಕ್ಕಣ್ಣ ಮುಂತಾದವರು ಈ ಭಾಗವಹಿಸಿದರು. ಮೋಹನ್ ಮಾಳಗಿ ನಿರ್ದೆಶನದ ಈ ಚಿತ್ರಕ್ಕೆ ಮನೋಮೂರ್ತಿ ಸಂಗೀತ ನೀಡುತ್ತಿದ್ದಾರೆ. ವೇಣುಗೋಪಾಲ್ ಅವರು ಕಥೆ ಬರೆದರೆ ಮೋಹನ್ಮಾಳಗಿ, ಗಿರೀಶ್ ಕಂಪ್ಲಾಪುರ್ ಹಾಗೂ ವೇಣುಗೋಪಾಲ್ ಮೂವರು ಸೇರಿ ಚಿತ್ರಕಥೆ ರಚಿಸಿದ್ದಾರೆ. ಗೌಸ್ಫ಼ಿರ್ ‘ಮಸ್ತ್ ಮೊಹಬತ್ ‘ಗೆ ಸಂಭಾಷಣೆ ಬರೆದರೆ ಜಯಂತಕಾಯ್ಕಿಣಿ ಹಾಗೂ ಕವಿರಾಜ್ ಗೀತರಚನೆ ಮಾಡಿದ್ದಾರೆ.

ವಿಜಯ್.ಸಿ.ಕುಮಾರ್ ಅವರ ಛಾಯಾಗ್ರಹಣ, ಈಶ್ವರ್ ಸಂಕಲನ, ಮೋಹನ್ ಪಂಡಿತ್ ಕಲಾನಿರ್ದೇಶನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಮನು. ಪ್ರೇಂ(ನೆನಪಿರಲಿ) ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ಪೂನಂ, ನವೀನ್ಕೃಷ್ಣ, ರಾಜುತಾಳಿಕೋಟೆ, ಸಾಧುಕೋಕಿಲ, ಸ್ವಯಂವರ ಚಂದ್ರು, ಅಶ್ವಿನ್, ಅರ್ಚನ, ಶಕಿಲಾ, ಚಿಕ್ಕಣ್ಣ ಮುಂತದವರಿದ್ದಾರೆ.